ಕಳೆದದು ಸಿಗುವುದೇ?

                                         

ಬಾನಿನಲ್ಲಿರಾತ್ರಿಯಲ್ಲಿ ಚುಕ್ಕಿ ಎಣಿಸುತಿದ್ದೆವು।

ಬಾವಿ ಸೇದಿನದಿಗೆ ಹೋಗಿ ಸಿಹಿನೀರ ಕುಯುತ್ತಿದ್ದೆವು।

ನಡೆದು ಹೋಗಿಸೈಕಲ್ಲು ತುಳಿದು ಸುತ್ತಲೆಲ್ಲಾಡುತ್ತಿದ್ದೆವು।

ಹಿತ್ತಲಿನ ಸೊಪ್ಪು,ಹಣ್ಣು ಕಾಯಿಯುಣ್ಣುತ್ತಿದ್ದೆವು॥


ಮೊರದಿ ಅಕ್ಕಿ ಧಾನ್ಯಗಳ ಅಂಗಳದಿ ಕೇರುತಿದ್ದೆವು।

ಪುಟ್ಟ ಪಕ್ಷಿ ಗುಬ್ಬಿ ಹಾರಿಕುಣಿದು ಗೂಡಕಟ್ಟುತ್ತಿದ್ದವು।

ಸಮಯವಿತ್ತು ಹತ್ತು ಜನಕೆ ಹರಿಕಥೆಹಾಡ ಕೇಳಲು।

ಪಕ್ಕದ ಮನೆಯಾಕೆ ಹಳೆಯ ನೆಂಟರಂತೆ ಪರಿಚಯ॥


ಅಂದಿನಕೂ ಇಂದಿನಕೂ ಏಕೆ ಇಷ್ಟು ಅಂತರ!

ಕಾಲ ಬದಲು ಆಯಿತೆನಾವೇನು ಅದಕೆ ಕಾರಣ?

ನಮ್ಮ ಕೈಲಿ ಏನಿದೇಇದಕೆ ಬೇಕೆ ಕಾತರ?

ಏಳಿಗೆ ಇದು ಸಾಗಿದೇಹೀಗೆಯೇ ನಿರಂತರ॥


ಭೂಮಿ ತಾಯಿ ಹೆಸರುವಾಸಿ ಎಂದು ತನ್ನ ತಾಳ್ಮೆಗೆ।

ಅದನ ಮೀರಿ ನಡೆದಿಹವೇನು ನಮ್ಮ ಅಂತ್ಯಕೆ?

ಬೆಳಕ ಕಲುಷ ರಾತ್ರಿಯಲ್ಲಿಜಲಭೂ ಮಾಲಿನ್ಯವೂ।

ಬಿಡಲಿಲ್ಲ ನೀರುನೆಲವಾಯು ಸುತ್ತಲಿನ ಎಂತವೂ॥


ನಾನು ಮಾಡ ಬಹುದದೇನುನಿಂತು ಒಮ್ಮೆ ಎಂದರೆ।

ಹೊಳೆವುದು ಅನೇಕ ಮಾರ್ಗಇರಲಿಸ್ವಲ್ಪ ತೊಂದರೆ।

ದಿನನಿತ್ಯದ ಅಳವಡಿಕೆಯು ಇಳಿಸುವುದವಳ ಭಾರವ।

ನನ್ನ ಅಳಿಲು ಸೇವೆಯಿರಲಿ  ಎನ್ನ ಭೂ ಮಾತೆಗೆ॥



ಪ್ಲಾಸ್ಟಿಕ್ಕು ಬೇಡ ಬಟ್ಟೆ ಚೀಲವಿರಲಿ ಮಾರ್ಕೆಟ್ಟಿಗೆ ಹೋದರೆ।

ಹದಿನೆಂಟು ಏಕೆ ಏಸಿಗೆ ಇರಲಿ ಇಪ್ಪತ್ತು ನಾಲ್ಕಿಗೆ।

ನೆಲ್ಲಿ ನಿಲಿಸಿ ತಡೆಯಿರಿ ಸೋರುವಿಕೆಯಆರಿಸಿ ಬೇಡದೀಪವ।

ಜಾಣ ನೀವು ನಾವು ಎಲ್ಲ ಹುಡುಕಿ ಕಳೆದುದೆಲ್ಲವ॥


- ನಾ ಶ್ರೀ ಮೋ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರ

ಅಗಲಿಕೆ

ಗೀತಕ್ಕನ ಹಕ್ಕಿ